ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅನುಭವವನ್ನು ಮೋದಿ ಹಂಚಿಕೊಂಡರು. ‘ಅಮಾಯಕರನ್ನು ಬಲಿ ಪಡೆದ ಈ ಘಟನೆ ಮರುಕಳಿಸದಿರಲಿ’ ಎಂದು ಆಶಿಸಿದ ಅವರು, ಸಹಕಾರ ಸಂಘಟನೆ ಸದಸ್ಯ ರಾಷ್ಟ್ರಗಳು ‘ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಸಂರಚನೆ’ (ರ್ಯಾಟ್ಸ್) ಅಡಿಯಲ್ಲಿ ಉಗ್ರವಾದದ ವಿರುದ್ಧಹೋರಾಡಲು ಕೈಜೋಡಿಸಬೇಕು’ ಎಂದರು.