ಎನ್ಸಿಸಿ ವಾರ್ಷಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆದಂದಿನಿಂದಲೂ ಕೆಲ ಕುಟುಂಬಗಳು, ರಾಜಕೀಯ ಪಕ್ಷಗಳು ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದವು. ಭಯೋತ್ಪಾದಕತೆ ಹೆಚ್ಚಾಗಲು ಇದೇ ಕಾರಣ ಎಂದು ಆರೋಪಿಸಿದರು. ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಅವರು, ‘ಮೂರು ಯುದ್ಧಗಳಲ್ಲಿ ಸೋತರೂ ಆ ದೇಶವು ಭಾರತವನ್ನು ಕೆಣಕುತ್ತಿದೆ. ಪಾಕಿಸ್ತಾನವನ್ನು ಮಣ್ಣುಮುಕ್ಕಿಸಲು ಭಾರತದ ಸೇನಾ ಪಡೆಗಳು 10ಕ್ಕಿಂತ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರು.