‘ಶಬರಿಮಲೆ ವಿಚಾರದಲ್ಲಿ ಯಾರನ್ನಾದರೂ ಬಂಧಿಸಿದ್ದರೆ, ಅವರು ಕಾನೂನನ್ನು ಉಲ್ಲಂಘಿಸಿರುವುದೇಅದಕ್ಕೆ ಕಾರಣ. ದೇಶದ ಬೇರೆ ರಾಜ್ಯಗಳಲ್ಲಿ ಸಂಘ ಪರಿವಾರದವರಿಗೆ ಮೋದಿಯ ಆಶೀರ್ವಾದವಿರುತ್ತದೆ. ಹೀಗಾಗಿಯೇ ಅಂತಹವರ ವಿರುದ್ಧ ಪ್ರಕರಣಗಳು ದಾಖಲಾಗುವುದಿಲ್ಲ, ಅಂತಹವರು ಜೈಲಿಗೂ ಹೋಗುವುದಿಲ್ಲ. ಆದರೆ ಕೇರಳದಲ್ಲಿ ಅಂಥದ್ದು ನಡೆಯುವುದಿಲ್ಲ. ಇಲ್ಲಿ ಕಾನೂನು ಮುರಿದವರು ಜೈಲಿಗೆ ಹೋಗಲೇಬೇಕು’ ಎಂದು ಅವರು ಅವರು ಹೇಳಿದ್ದಾರೆ.