ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು, 2014ರವರೆಗೂ ಮನಮೋಹನ್ ಸಿಂಗ್ ಯಶಸ್ವಿಯಾಗಿ ಸರ್ಕಾರ ನಡೆಸಿದರು. ಆದರೆ ಅಂದು ವಿರೋಧ ಪಕ್ಷದಲ್ಲಿ ನರೇಂದ್ರ ಮೋದಿ ಇದ್ದರೆ ಎಂದು ಶರದ್ ಪವಾರ್ಪ್ರಶ್ನೆ ಮಾಡಿದರು. 2004ರಲ್ಲಿ ವಾಜಪೇಯಿ ಅವರನ್ನು ಪ್ರಧಾನಿ ಎಂದು ಬಿಂಬಿಸಲಾಗಿತ್ತು, ಆಗ ಬಿಜೆಪಿಯವರು ವಾಜಪೇಯಿ ಬಿಟ್ಟರೆ ಪರ್ಯಾಯ ನಾಯಕರು ಇಲ್ಲ ಎಂದು ಹೇಳಿದ್ದರು.