ಲಖನೌ: ಉತ್ತರ ಪ್ರದೇಶ ವಿಧಾನಸಭೆಯ ಮುಂಗಾರು ಆಧಿವೇಶನವನ್ನು ಆಗಸ್ಟ್ನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸ್ಪೀಕರ್ ನಾರಾಯಣ ದೀಕ್ಷಿತ್ ಭಾನುವಾರ ತಿಳಿಸಿದರು.
ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವಿಡಿಯೊ ಕಾನ್ಪರೆನ್ಸ್ ಸೇರಿದಂತೆ ಅಧಿವೇಶನ ನಡೆಸಲು ಇರುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಉಳಿದಂತೆ, ಸಾಕಷ್ಟು ಆಸನ ವ್ಯವಸ್ಥೆ ಇರುವ ಲೋಕಭವನದಲ್ಲಿ ಅಧಿವೇಶನ ಆಯೋಜಿಸುವುದು, ವಿಧಾನಸಭೆಯ ಕೆಲವು ಆಸನಗಳನ್ನು ತೆಗೆಸಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಒತ್ತು ನೀಡುವ ಆಯ್ಕೆಗಳೂ ಮುಕ್ತವಾಗಿವೆ ಎಂದು ಹೇಳಿದರು.