ನವದೆಹಲಿ: ಮಕ್ಕಳ ತುರ್ತು ಸಹಾಯವಾಣಿಗೆ ಕರೆ ಮಾಡುವ ಮಕ್ಕಳು ಒಂದು ವೇಳೆ ಮೌನವಾಗಿದ್ದಲ್ಲಿ, ಮಾತನಾಡುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ.
ಕರೆ ಮಾಡಿದ ಮೂವರ ಪೈಕಿ ಒಂದು ಮಗು (ಸೈಲೆಂಟ್ ಅಥವಾ ಮ್ಯೂಟೆಡ್ ಕಾಲ್) ಮಾತನಾಡದೇ ಮೌನವಾಗಿತ್ತು ಎಂದು ಇತ್ತೀಚೆಗೆಸಹಾಯವಾಣಿ ಪ್ರತಿಷ್ಠಾನವು ವರದಿ ಮಾಡಿತ್ತು.
‘ಸಹಾಯವಾಣಿಗೆ ಕರೆ ಮಾಡುವ ಮಗು ಭಯದಿಂದ ಮಾತನಾಡದೇ ಇರಬಹುದು. ತನ್ನ ಹತ್ತಿರದ ಸಂಬಂಧ ವಿರುದ್ಧವಾಗಿ ದೂರು ನೀಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಇರಬಹುದು. ಅಂತಹ ಮಕ್ಕಳಿಗೆ ಮಾತನಾಡಲು ಧೈರ್ಯ ತುಂಬಿ’ ಎಂದು ಸಹಾಯವಾಣಿಗೆ ನಿರ್ದೇಶನ ನೀಡಲಾಗಿದೆ.
ಅಂಕಿ–ಅಂಶ: 450 ದೇಶದಾದ್ಯಂತ ಇರುವ ಮಕ್ಕಳ ಸಹಾಯವಾಣಿ ಸಂಪರ್ಕ ಕೇಂದ್ರಗಳು