ಪಕ್ಷದಿಂದ ಅಮಾನತುಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಸೌಮಿತ್ರ, ‘ಪಾಕಿಸ್ತಾನ ರಚನೆಯ ಪರಿಕಲ್ಪನೆ ಬ್ರಿಟಿಷರದ್ದಾಗಿತ್ತು. ಪ್ರಧಾನಿಯಾಗಬೇಕೆಂಬ ಧಾವಂತದಲ್ಲಿದ್ದ ನೆಹರೂ ಮತ್ತು ಜಿನ್ನಾ ಈ ಪರಿಕಲ್ಪನೆಯ ಪ್ರಚಾರಕರಾಗಿದ್ದರು. ರಾಷ್ಟ್ರ ವಿಭಜನೆಯ ಪ್ರಕ್ರಿಯೆಗೆ ಗಾಂಧೀಜಿಯ ಆಶೀರ್ವಾದವೂ ಇತ್ತು. ಅವರು ಮೌನವಾಗಿದ್ದು ಪಾಕಿಸ್ತಾನ ರಚನೆಗೆ ಬೆಂಬಲ ನೀಡಿದ್ದರಿಂದ ಅವರನ್ನು ‘ಪಾಕಿಸ್ತಾನದ ರಾಷ್ಟ್ರಪಿತ’ ಎನ್ನುವುದೇ ಸರಿ’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.