‘ವಿಷ್ಣುಕುಮಾರ್ ಬೆಳಿಗ್ಗೆ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಈ ಕೃತ್ತ ಎಸಗಿದ್ದಾನೆ. ಈತನ ಚೀರಾಟ ಕೇಳಿದ ಜೈಲಿನ ಸಿಬ್ಬಂದಿ ಹಾಗೂ ಇತರ ಕೈದಿಗಳು ಬಂದು ನೋಡಿದಾಗ, ವಿಷ್ಣುಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ. ಕೂಡಲೇ ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಆರೋಗ್ಯ ಗಂಭೀರವಾಗಿದೆ’ ಎಂದು ಜೈಲಿನ ಸೂಪರಿಂಟೆಂಡೆಂಟ್ ಮನೋಜ್ ಸಾಹು ತಿಳಿಸಿದ್ದಾರೆ.