ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ವಾಲಿಯರ್‌ | ವೃಷಣ ಕತ್ತರಿಸಿಕೊಂಡ ಕೊಲೆ ಅಪರಾಧಿ

Last Updated 5 ಮೇ 2020, 19:45 IST
ಅಕ್ಷರ ಗಾತ್ರ

ಗ್ವಾಲಿಯರ್‌: ಕೊಲೆ ಅಪರಾಧಿಯೊಬ್ಬ ತನ್ನ ವೃಷಣಗಳನ್ನು ಕತ್ತರಿಸಿ, ಜೈಲಿನ ಆವರಣದಲ್ಲಿರುವ ದೇವಾಲಯದ ಶಿವನ ಮೂರ್ತಿಗೆ ಅರ್ಪಿಸಿದ ವಿಲಕ್ಷಣ ಕೃತ್ಯಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಮಂಗಳವಾರ ನಡೆದಿದೆ.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿಷ್ಣುಕುಮಾರ್‌ ಎಂಬಾತ ಈ ಕೃತ್ಯ ಎಸಗಿರುವ ಅಪರಾಧಿ.

‘ವಿಷ್ಣುಕುಮಾರ್‌ ಬೆಳಿಗ್ಗೆ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಈ ಕೃತ್ತ ಎಸಗಿದ್ದಾನೆ. ಈತನ ಚೀರಾಟ ಕೇಳಿದ ಜೈಲಿನ ಸಿಬ್ಬಂದಿ ಹಾಗೂ ಇತರ ಕೈದಿಗಳು ಬಂದು ನೋಡಿದಾಗ, ವಿಷ್ಣುಕುಮಾರ್‌ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ. ಕೂಡಲೇ ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಆರೋಗ್ಯ ಗಂಭೀರವಾಗಿದೆ’ ಎಂದು ಜೈಲಿನ ಸೂಪರಿಂಟೆಂಡೆಂಟ್‌ ಮನೋಜ್‌ ಸಾಹು ತಿಳಿಸಿದ್ದಾರೆ.

‘ಶಿವ ಪರಮಾತ್ಮ ನನ್ನ ಕನಸಿನಲ್ಲಿ ಬಂದು, ಜೈಲು ಆವರಣದಲ್ಲಿರುವ ದೇವಾಲಯದಲ್ಲಿ ನನ್ನ ಗುಪ್ತಾಂಗಳನ್ನು ಅರ್ಪಿಸುವಂತೆ ಕೇಳಿದ. ಹೀಗಾಗಿ ಈ ಕೃತ್ಯ ಎಸಗಿದೆ’ ಎಂದು ಆತ ವಿಚಾರಣೆ ವೇಳೆ ತಿಳಿಸಿದ್ದಾಗಿ ಸಾಹು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT