ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಬಿ ಹಗರಣ: ಹಲವೆಡೆ ಸಿಬಿಐ ದಾಳಿ

Last Updated 3 ಏಪ್ರಿಲ್ 2019, 20:14 IST
ಅಕ್ಷರ ಗಾತ್ರ

ಶಿಲ್ಲಾಂಗ್‌: ಮೇಘಾಲಯ ಗ್ರಾಮೀಣ ಬ್ಯಾಂಕ್‌ನಲ್ಲಿ (ಎಂಆರ್‌ಬಿ) ನಡೆದ ₹ 14.34 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಟ್ಟಣದ ಹಲವೆಡೆ ದಾಳಿ ನಡೆಸಿದೆ.

ಬ್ಯಾಂಕ್‌ನ ಮಹಾಪ್ರಬಂಧಕರು ಮಾರ್ಚ್‌ 27ರಂದು ನೀಡಿದ ದೂರಿನ ಆಧಾರದಲ್ಲಿ ನಗರ ಹಾಗೂ ಹೊರವಲಯಗಳಲ್ಲಿ ದಾಳಿ ನಡೆಸಲಾಗಿದೆ. ಬ್ಯಾಂಕ್‌ನ ಇವುದ್‌ ಶಾಖೆಯಲ್ಲಿ ಸುಮಾರು 150 ಮಂದಿಗೆ ಅಕ್ರಮವಾಗಿ ಸಾಲ ವಿತರಣೆ ಮಾಡಲಾಗಿದೆ.

ಶಾಖೆಯ ವ್ಯವಸ್ಥಾಪಕರ ಮೂಲಕ ಈ ಕೃತ್ಯ ನಡೆದಿದೆ ಎಂದು ಮಹಾಪ್ರಬಂಧಕರು ದೂರಿನಲ್ಲಿ ಹೇಳಿದ್ದಾರೆ.

ಶಾಖಾ ವ್ಯವಸ್ಥಾಪಕ ಸಹಿತ ಅಕ್ರಮವಾಗಿ ಸಾಲ ಪಡೆದವರ ಮನೆಗಳ ಮೇಲೆ ದಾಳಿ ನಡೆದಿದೆ.

ಶಾಖಾ ವ್ಯವಸ್ಥಾಪಕರು ಖಾಸಗಿ ಸಾಲಗಾರರೊಂದಿಗೆ ಸೇರಿ ನಗದು ಸಾಲ, ಗೃಹ ನಿರ್ಮಾಣ ಸಾಲ, ಸಾಮಾನ್ಯ ಸಾಲ, ಸಣ್ಣ ಉದ್ಯಮ ಸಾಲ ನೀಡಿದ್ದರು. ಕೊನೆಗೆ ಇದನ್ನು ಮರುಪಾವತಿಸಲಾಗದ ಸಾಲವಾಗಿ (ಎನ್‌ಪಿಎ) ಘೋಷಿಸಲಾಗುತ್ತಿತ್ತು. ಇದರಿಂದ ಬ್ಯಾಂಕ್‌ಗೆ ಅಪಾರ ನಷ್ಟ ಉಂಟಾಗುತ್ತಿತ್ತು ಎಂದು ಬ್ಯಾಂಕ್‌ನ ಮುಖ್ಯ ಜಾಗೃತ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT