ಹೋಟೆಲ್ನಿಂದ ಹೊರಬರುತ್ತಿದ್ದ ಅವರನ್ನು ಮಾಧ್ಯಮಗಳು ಮಾತಿಗೆಳೆದವು. ಈ ವೇಳೆ ಮಾತನಾಡಿದ ಅವರು, ’ಕರ್ನಾಟಕದಲ್ಲಿ ಎದುರಾಗಿರುವ ರಾಜಕೀಯ ಸನ್ನಿವೇಶದ ಬಗ್ಗೆ ಮಾಧ್ಯಮಗಳ ವರದಿಗಳನ್ನು ಕೇಳಿ ಬಲ್ಲೆ. ಆದರೆ, ನಾನು ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ನಿರತನಾಗಿದ್ದೇನೆ. ಶಾಸಕರಿಗೂ ನನಗೂ ಸಂಬಂಧವಿಲ್ಲ,‘ ಎಂದು ಹೇಳಿದರು.