ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈಶ್ರೀರಾಮ್‌’ ಎನ್ನದ್ದಕ್ಕೆ ಹಲ್ಲೆ

Last Updated 29 ಜೂನ್ 2019, 18:58 IST
ಅಕ್ಷರ ಗಾತ್ರ

ಕಾನ್ಪುರ: ‘ಜೈಶ್ರೀರಾಮ್‌’ ಎಂದು ಹೇಳಲು ನಿರಾಕರಿಸಿದ 16 ವರ್ಷದ ಮುಸ್ಲಿಂ ಯುವಕನ ಮೇಲೆ ಅಪರಿಚಿತರ ಗುಂಪೊಂದು ಹಲ್ಲೆ ನಡೆಸಿದೆ. ಈ ಯುವಕ ಸಾಂಪ್ರದಾಯಿಕ ಟೋಪಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಮಾಜ್‌ ಮಾಡಿ ಕಿದ್ವಾಯಿ ನಗರದಿಂದ ಮನೆಗೆ ವಾಪಸಾಗುತ್ತಿದ್ದಾಗ ಬರ್ರಾ ಗ್ರಾಮದ ಯುವಕ ಮೊಹಮ್ಮದ್ ತೇಜ್‌ ಮೇಲೆ ಶುಕ್ರವಾರ ಹಲ್ಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಬೈಕ್‌ನಲ್ಲಿ ಬಂದ ಮೂವರಿಂದ ನಾಲ್ಕು ಮಂದಿ ಗುಂಪು ತೇಜ್ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿ ಹಲ್ಲೆ ನಡೆಸಿದೆ. ಟೋಪಿ ಧರಿಸಿದ್ದಕ್ಕೆ ಆಕ್ಷೇಪಿಸಿದ್ದಾರೆ ಎಂದು ಠಾಣಾಧಿಕಾರಿ ಸತೀಶ್‌ ಕುಮಾರ್ ಹೇಳಿದ್ದಾರೆ.

‘ನನ್ನ ಟೋಪಿಯನ್ನು ಕಿತ್ತೆಸೆದರು. ನೆಲಕ್ಕುರುಳಿಸಿ ಬಾಸುಂಡೆ ಬರುವಂತೆ ಹೊಡೆದರು. ಕೊನೆಗೆ ಜೈಶ್ರೀರಾಮ್‌ ಎಂದು ಹೇಳಲು ಒತ್ತಾಯಿಸಿದರು’ ಎಂದು ತೇಜ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT