ಉತ್ತರ ಪ್ರದೇಶದ ಆವಲಾದಲ್ಲಿಬುಧವಾರ ರ್ಯಾಲಿಯಲ್ಲಿ ಮಾತನಾಡಿದ ಯೋಗಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗಾಗಿ ದುಡಿದಿದ್ದಾರೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಅವರೊಂದಿಗೆ ಇದ್ದಾರೆ ಎಂಬುದು ಬಿಜೆಪಿಯ ಹೆಮ್ಮೆ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ನಮ್ಮ ಮುಸ್ಲಿಂ ಸಹೋದರಿಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಇತ್ತೀಚಿಗೆ.ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ.ಶತಮಾನಗಳ ಕಾಲ ನಿಂದನೆ ಮತ್ತು ಬಂಧನದಲ್ಲಿದ್ದ ನಮ್ಮ ಮುಸ್ಲಿಂ ಸಹೋದರಿಯರನ್ನು ನಾವು ಸ್ವತಂತ್ರರನ್ನಾಗಿ ಮಾಡಿದ್ದೇವೆ. ತ್ರಿವಳಿ ತಲಾಖ್ನಿಂದ ಅವರ ಮೇಲೆ ದೌರ್ಜನ್ಯವೆಸಗಲಾಗುತ್ತಿತ್ತು. ಇದನ್ನು ನಿಲ್ಲಿಸುವ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅವರಿಗೆ ಗೌರವ ತಂದು ಕೊಟ್ಟಿತು. ಮುಸ್ಲಿಂ ಸಹೋದರಿಯರೇ, ನೀವು ನಿಮ್ಮನಿಜವಾದ ಸಹೋದರರನ್ನು ಗುರುತಿಸಿಎಂದಿದ್ದಾರೆಯೋಗಿ ಆದಿತ್ಯನಾಥ.