‘ಸಂಸತ್ತಿನ ಹೊರಗಾಗಲೀ, ಸಂಸತ್ತಿನ ಒಳಗಾಗಲೀ ಲೋಹಿಯಾ ಮಾತು ಆರಂಭಿಸಿದರೆ ಕಾಂಗ್ರೆಸ್ಗೆ ನಡುಕ ಆರಂಭವಾಗುತ್ತಿತ್ತು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೃಷಿ ಕ್ಷೇತ್ರವಾಗಲೀ, ಕೈಗಾರಿಕಾ ಕ್ಷೇತ್ರವಾಗಲೀ ಸುಧಾರಿಸಲಿಲ್ಲ ಎಂದು ಲೋಹಿಯಾ ಅವರು ಸದಾ ಟೀಕಿಸುತ್ತಿದ್ದರು. ಲೋಹಿಯಾ ಯುಗದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲೂ ಹೀಗೇ ಆಗಿತ್ತು. ಆ ಸರ್ಕಾರಗಳಂತೂ ರೈತರನ್ನು ಶೋಷಿಸಿದವು, ಉದ್ದಿಮೆಗಳನ್ನು ತುಳಿದವು (ಕಾಂಗ್ರೆಸ್ ಸ್ನೇಹಿತರ ಮತ್ತು ಕಾಂಗ್ರೆಸ್ ನಾಯಕರ ಉದ್ದಿಮೆಗಳು ಮಾತ್ರ ಸುಧಾರಣೆಗೊಂಡವು) ಮತ್ತು ದೇಶದ ಭದ್ರತೆಯನ್ನು ಕಡೆಗಣಿಸಿದವು’ ಎಂದು ಮೋದಿ ತಮ್ಮ ಬ್ಲಾಗ್ ಬರಹದಲ್ಲಿ ಆರೋಪಿಸಿದ್ದಾರೆ.