ಪುದುಚೇರಿ (ಪಿಟಿಐ): ‘ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮಾಡಿರುವ ಆರೋಪ ಅಸಂಸದೀಯ, ಅನಿಯಂತ್ರಿತ, ಅನಾಗರಿಕ, ಅಸಹ್ಯ ಮತ್ತು ಸ್ವೀಕಾರಕ್ಕೆ ಅರ್ಹವಲ್ಲದ್ದು’ ಎಂದು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ತಿಳಿಸಿದ್ದಾರೆ.
ಪ್ರಾದೇಶಿಕ ಕ್ಯಾಬಿನೆಟ್ ನಿರ್ಧರಿಸಿದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಅಡ್ಡಿಯಾಗಿದ್ದಾರೆ ಎಂದು ಕಿರಣ್ ಬೇಡಿ ಆರೋಪಿಸಿದ್ದರಿಂದ ಮುಖ್ಯಮಂತ್ರಿ ಅವರನ್ನು ರಾಕ್ಷಸಿ ಎಂದು ಕರೆದಿದ್ದರು.
ವಾಟ್ಸ್ಆ್ಯಪ್ನಲ್ಲಿ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಿರಣ್ ಬೇಡಿ, ‘ರಾಕ್ಷಸರು ಎಲ್ಲರ ಒಳಿತಿಗಾಗಿ ಕೆಲಸ ಮಾಡುವುದಿಲ್ಲ. ರಾಕ್ಷಸರು ಸ್ವಾರ್ಥ ಬಯಸುತ್ತಾರೆ ಮತ್ತು ಜನರನ್ನು ಹೆದರಿಸುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.
ಇಂದಿರಾ ಗಾಂಧಿಯವರ 35 ನೇ ಪುಣ್ಯಸ್ಮರಣೆ ಸಭೆಯಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದರು.