ರೈತರನ್ನು ಲೂಟಿ ಮಾಡಿದ ಶೆಹನ್ಶಾನನ್ನು ಈ ಚೌಕೀದಾರ್ ಕೋರ್ಟಿಗೆಳೆದಿದ್ದಾನೆ.ಜಾಮೀನು ಪಡೆಯುವುದಕ್ಕಾಗಿ ಆವರು ನಿರ್ದೇಶನಾಲಯ ಮತ್ತು ನ್ಯಾಯಾಲಯದ ಸುತ್ತ ಅಲೆಯುತ್ತಿದ್ದಾರೆ. ಅವರು ತನ್ನನ್ನು ತಾನು ಶೆಹೆನ್ಶಾ ಎಂದು ಅಂದುಕೊಂಡಿದ್ದರು. ಆದರೆ ಈಗ ಅವರಿಗೆ ನಡುಕ ಹುಟ್ಟಿದೆ. ನಾನು ಈಗಾಗಲೇ ಅವರನ್ನು ಜೈಲಿನ ಬಾಗಿಲುವರೆಗೆ ಕರೆದೊಯ್ದಿದ್ದೇನೆ.ಮುಂದಿನ 5 ವರ್ಷಗಳಲ್ಲಿ ಅವರನ್ನು ಜೈಲಿಗಟ್ಟಲು ನನಗೆ ಆಶೀರ್ವದಿಸಿ ಎಂದು ಹರ್ಯಾಣದ ಫತೇಹಾಬಾದ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ನರೇಂದ್ರ ಮೋದಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.