ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಯ್‍ವಾಲಾಗಳನ್ನು ಮರೆತು ಚೌಕೀದಾರ್‌ಗಳನ್ನು ನೆನಪಿಸಿಕೊಂಡ ಮೋದಿ: ಕಪಿಲ್ ಸಿಬಲ್

Last Updated 24 ಮಾರ್ಚ್ 2019, 13:48 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚಾಯ್‍ವಾಲಾಗಳನ್ನು ಮರೆತು ಈಗ ಚೌಕೀದಾರ್‌ಗಳನ್ನು ನೆನಪಿಸಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಅವರು ಮುಂದಿನ ಬಾರಿ ಬೇರೊಬ್ಬರನ್ನುನೆನಪಿಸಿಕೊಳ್ಳುತ್ತಾರೆಎಂದು ಕಾಂಗ್ರೆಸ್‍ನ ಹಿರಿಯ ನೇತಾರ ಕಪಿಲ್ ಸಿಬಲ್ ಹೇಳಿದ್ದಾರೆ.

ಬಾಲಾಕೋಟ್ ವಾಯುದಾಳಿಯನ್ನು ಮೋದಿರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ ಸಿಬಲ್, ಗುರುದಾಸ್‍ಪುರ್, ಪಠಾಣ್‌ಕೋಟ್, ಉರಿ, ಬರಮುಲ್ಲಾ ಮತ್ತು ಪುಲ್ವಾಮದಲ್ಲಿ ಉಗ್ರ ದಾಳಿ ನಡೆದಾಗ ಈ ಚೌಕೀದಾರ್ ನಿದ್ದೆ ಮಾಡಿದ್ದರೇ? ಎಂದು ಪ್ರಶ್ನಿಸಿದ್ದಾರೆ.

ಮೋದಿಯವರ ಮೈ ಭೀ ಚೌಕೀದಾರ್ ಅಭಿಯಾನಕ್ಕೆ ವಿರುದ್ಧವಾಗಿ ಚೌಕೀದಾರ್ ಚೋರ್ ಹೈ ಎಂದು ಕಾಂಗ್ರೆಸ್ ಬಿಜೆಪಿಯನ್ನು ಕಾಲೆಳೆದಿತ್ತು. ಬಿಜೆಪಿಯವರ ಈ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಸಿಬಲ್, ಮೋದಿ ಈಗ ಚಾಯ್ ವಾಲಾಗಳನ್ನು ಮರೆತಿದ್ದಾರೆ. ಈಗ ಅವರು ಚೌಕೀದಾರ್‌ಗಳನ್ನು ನೆನಪಿಸಿಕೊಂಡಿದ್ದಾರೆ. ಮುಂದಿನ ಬಾರಿ ಚೌಕೀದಾರ್‌ಗಳನ್ನು ಮರೆದು ಬೇರೊಬ್ಬರನ್ನು ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT