60 ವರ್ಷ ವಯಸ್ಸಿನ ಕಾರ್ಮಿಕ ಭುವನಚಂದ್ರನ್ ಎಂಬವರು ಮಂಗಳವಾರ ಪೊದೆಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಹಠಾತ್ತಾಗಿ ಹೆಬ್ಬಾವು ದಾಳಿ ಮಾಡಿದೆ. ಸುಮಾರು 10 ಅಡಿ ಉದ್ದದ ಹೆಬ್ಬಾವು ಹಿಡಿತ ಬಿಗಿಯಾಗಿಸುತ್ತಿದ್ದಂತೆ ಅದೃಷ್ಟವಶಾತ್,ಜತೆಗೆ ಕೆಲಸ ಮಾಡುತ್ತಿದ್ದ ಇತರರಿಗೆ ವಿಷಯ ತಿಳಿದಿದೆ. ಕೂಡಲೇ ಧಾವಿಸಿದ ಇತರ ಕಾರ್ಮಿಕರು ಹೆಬ್ಬಾವಿನ ಹಿಡಿತದಿಂದಭುವನಚಂದ್ರನ್ ಅವರನ್ನು ರಕ್ಷಿಸಿದ್ದಾರೆ.