J&K: Farooq Abdullah and wife Molly at their residence in Srinagar. A National Conference (NC) delegation has reached to meet him. pic.twitter.com/XgtNGIGiwz
ಪಕ್ಷದ ನಿಯೋಗವು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಹರಿ ನಿವಾಸ್ದಲ್ಲಿ ಭೇಟಿ ಮಾಡಿದೆ. 370ನೇ ವಿಧಿಯನ್ನು ಕೇಂದ್ರಸರ್ಕಾರ ರದ್ದು ಮಾಡಿದಂದಿನಿಂದ ಅಂದರೆ ಆಗಸ್ಟ್ 5ರ ನಂತರ ಒಮರ್ ಅಬ್ದುಲ್ಲಾ ಮತ್ತು ಫರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು.
ನ್ಯಾಷನಲ್ ಕಾನ್ಫರೆನ್ಸ್ ಪ್ರಾಂತೀಯ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ಮತ್ತು ಶಾಸಕರ ತಂಡವು ಭಾನುವಾರ ಬೆಳಗ್ಗೆ ಶ್ರೀನಗರಕ್ಕೆ ತಲುಪಿತ್ತು. ನಾಯಕರಿಬ್ಬರೂ ಚೆನ್ನಾಗಿದ್ದಾರೆ. ಅದೇ ವೇಳೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಇಬ್ಬರೂ ನೊಂದುಕೊಂಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ಪ್ರಕ್ರಿಯೆಗಳು ನಡೆಯಬೇಕಾದರೆ ಪ್ರಮುಖ ನಾಯಕರನ್ನು ಬಂಧಮುಕ್ತಗೊಳಿಸಬೇಕೆಂದು ರಾಣಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
2 ತಿಂಗಳುಗಳ ಕಾಲ ಗೃಹ ಬಂಧನದಲ್ಲಿದ್ದ ಫರೂಕ್ ಅಬ್ದುಲ್ಲಾ ಶನಿವಾರ ಮನೆಯಿಂದ ಹೊರಗೆ ಬಂದಿದ್ದರು. ಫರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಲು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಿಯೋಗಕ್ಕೆ ಅನುಮತಿ ನೀಡಬೇಕು ಎಂದು ನಾಯಕರು ಗುರುವಾರ ರಾಜ್ಯಪಾಲ ಮಲಿಕ್ ಅವರಿಗೆ ಮನವಿ ಸಲ್ಲಿಸಿದ್ದರು. ಜಮ್ಮುನಲ್ಲಿ ಬಂಧಿತರಾಗಿದ್ದ ಎಲ್ಲ ನಾಯಕರನ್ನು ಹಂತಹಂತವಾಗಿ ಬಂಧಮುಕ್ತಗೊಳಿಸಲಾಗುವುದು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಲಹೆಗಾರ ಫರೂಕ್ ಖಾನ್ ಹೇಳಿದ್ದರು.