ಜನವರಿ 30 ರಂದು ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದ್ದು, ದೆಹಲಿಯ ರಾಜ್ಘಾಟ್ದಿಂದಲೇ ಮಾನವ ಸರಪಳಿ ರಚಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಬುಡಕಟ್ಟು ಸಮುದಾಯ, ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಅಂಗವಿಕಲರು ಮತ್ತಿತರ 111 ಸಂಘಟನೆಗಳು ಸೇರಿ ‘ಜನ ಏಕ್ತಾ ಜನ ಅಧಿಕಾರ ಆಂದೋಲನ’ (ಜೆಇಜೆಎಎ) ರಚಿಸಿಕೊಂಡಿದ್ದು, ಇದರ ಅಡಿಯಲ್ಲಿ ಈ ಹೋರಾಟ ನಡೆಯಲಿದೆ.