ವಾಸುದೇವನ್ ಮತ್ತು ನಬೀಸಾ ದಂಪತಿಯ ಪುತ್ರನಾದ ಬೈಜು ಆದಿರಪ್ಪಳ್ಳಿ ಅರಣ್ಯಭಾಗದಲ್ಲಿ ಆದಿವಾಸಿ ಜನರೊಂದಿಗೆ ಬೆಳೆದಿದ್ದರು.ಮೊದಮೊದಲು ಬೇಟೆಗಾರನಾಗಿದ್ದ ಇವರು ಕಳ್ಳಭಟ್ಟಿಯನ್ನೂ ತಯಾರಿಸುತ್ತಿದ್ದರು.ಕಾಡಿನೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರಿಂದ ವನ್ಯಜೀವಿಗಳತ್ತ ಒಲವು ಬೆಳೆಯ ತೊಡಗಿತು. ಆಮೇಲೆ ಅವರು ಅರಣ್ಯಪಾಲಕರಾದರು.
ಆದಿರಪ್ಪಳ್ಳಿ ಅರಣ್ಯದಲ್ಲಿ ಗಂಡು ಹಾರ್ನ್ಬಿಲ್ ಸತ್ತು ಹೋದಾಗ ಹಾಕಿದ ಒಂದು ಫೇಸ್ಬುಕ್ ಪೋಸ್ಟ್ನಿಂದಾಗಿ ಬಿಜು ಗಮನ ಸೆಳೆದರು. ಸಾಮಾನ್ಯ ಎತ್ತರದಲ್ಲಿ ಹಾರುತ್ತಿದ್ದ ಹಾರ್ನ್ಬಿಲ್ ಒಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಹಕ್ಕಿಸತ್ತಿದ್ದು,ಮನುಷ್ಯನ ಅಹಂಕಾರದ ಬಗ್ಗೆ ಬೈಜು ಫೇಸ್ಬುಕ್ನಲ್ಲಿ ಬರೆದಿದ್ದರು.