ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾತ್ರಾ, ‘ಇಮ್ರಾನ್ ಖಾನ್ ಅವರ ಜತೆ ಸಿಧು ಕಾರ್ಯನಿರ್ವಹಿಸಲಿ. ಇದಕ್ಕಾಗಿ ಅವರು ಆ ದೇಶಕ್ಕೆ ತೆರಳಲಿ. ಪದೇ ಪದೇ ಪಾಕಿಸ್ತಾನದ ಬಗ್ಗೆ ಒಲವು ತೋರುತ್ತಿರುವುದು ಸಹ ಒಂದು ಸಂಚು. ಉತ್ತರ ಮತ್ತು ದಕ್ಷಿಣ ಭಾರತ ಎಂದು ವಿಭಜಿಸುವ ಮನಸ್ಥಿತಿಯನ್ನು ಇದು ತೋರಿಸುತ್ತದೆ. ಕಾಂಗ್ರೆಸ್ ಸಹ ಇದೇ ಕಾರ್ಯತಂತ್ರವನ್ನು ಅನುಸರಿಸುತ್ತದೆ’ ಎಂದು ಟೀಕಿಸಿದ್ದಾರೆ.