ರಾಯಪುರ: ಒಂದು ಕಾಲದಲ್ಲಿ ಬಲವಾದ ಹಿಡಿತ ಸಾಧಿಸಿದ್ದ ನೆಲದಲ್ಲೇ ಹಿನ್ನಡೆ ಅನುಭವಿಸುತ್ತಿರುವ ನಕ್ಸಲೀಯರು, ಛತ್ತೀಸಗಡದ ಬಸ್ತಾರ್ನಲ್ಲಿ ಹೊಸ ಕಾರ್ಯತಂತ್ರದ ಮೊರೆ ಹೋಗಿದ್ದಾರೆ. ವಿಯೆಟ್ನಾಂನ ಗೆರಿಲ್ಲಾ ಯುದ್ಧದ ಮಾದರಿಯಲ್ಲಿ, ನಕಲಿ ಬಂದೂಕುಗಳನ್ನು ಹಿಡಿದ ಮಾನವನ ಪ್ರತಿಕೃತಿಗಳನ್ನು ಅರಣ್ಯದ ಆಯಕಟ್ಟಿನ ಜಾಗಗಳಲ್ಲಿ ಇರಿಸುತ್ತಿದ್ದಾರೆ.