ಸ್ವಲ್ಪವೂ ಆರ್ಥಿಕ ಬಂಡವಾಳ ಇಲ್ಲದೆ, ಭ್ರಷ್ಟತೆಯ ವಿರುದ್ಧದ ಹೋರಾಟದಿಂದಲೇ ಜನಪ್ರಿಯರಾಗಿದ್ದ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಮುಖ್ಯಮಂತ್ರಿಯಾದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಎಎಪಿ ಆಂದೋಲನ ದೇಶವ್ಯಾಪಿಯಾಗಿ ಹೊಸ ರಾಜಕೀಯ ಶಕೆ ಆರಂಭವಾಗುವುದೇನೋ ಎಂಬ ಭಾವನೆ ಮೂಡಿಸಿತ್ತು.