‘ನಿಯಮಾವಳಿಯಲ್ಲಿ ಬಳಸಿರುವ ‘ರಾಜಕೀಯ ಹಿತಾಸಕ್ತಿ’ ಎಂಬ ವಿಚಾರದಲ್ಲಿ ಸ್ಪಷ್ಟತೆಯ ಕೊರತೆ ಇದ್ದು, ಅದು ದುರ್ಬಳಕೆಯಾಗುತ್ತಿದೆ’ ಎಂಬ ಇನ್ಸಾಫ್ ಸಂಘಟನೆಯ ಪರ ವಕೀಲ ಸಂಜಯ್ ಪಾರೀಖ್ ಅವರ ವಾದವನ್ನು ಒಪ್ಪಿದ ನ್ಯಾಯಾಲಯ, ‘ಜನರ ಸಾಮಾಜಿಕ, ಆರ್ಥಿಕ ಏಳಿಗೆಗಾಗಿ ಕೆಲಸ ಮಾಡುವ, ರಾಜಕೀಯದ ಜತೆಗೆ ಯಾವುದೇ ಸಂಬಂಧ ಹೊಂದಿರದ ಸಂಘಟನೆಯನ್ನು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ–2010 ಅಡಿಯಾಗಲಿ, ನಂತರ ಜಾರಿ ಮಾಡಿದ ನಿಯಮಾವಳಿಗಳ ಅಡಿಯಾಗಲಿ ಪರಿಗಣಿಸಬಾರದು’ ಎಂದು ಸ್ಪಷ್ಟಪಡಿಸಿದೆ.