ಕಾರಗ್ಪುರ:ಪಶ್ಚಿಮ ಬಂಗಾಳದಲ್ಲಿ ಒಂಬತ್ತು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗೆ (ಆರ್ಪಿಎಫ್) ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇವರಲ್ಲಿ ಹೆಚ್ಚಿನವರು ಆರ್ಪಿಎಫ್ ತುಕಡಿಯ ಭಾಗವಾಗಿದ್ದು, ದೆಹಲಿಯಿಂದ ಪಾರ್ಸೆಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಇಟ್ಟುಕೊಂಡು ಬರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಬ್ಬ ಆರ್ಪಿಎಫ್ ಸಿಬ್ಬಂದಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಇತರೆ ಸಿಬ್ಬಂದಿಗಳನ್ನು ಪರೀಕ್ಷಿಸಲಾಗಿದೆ. ಸದ್ಯ 24 ಜನರ ವರದಿಗಳು ಲಭ್ಯವಾಗಿದ್ದು, ಮತ್ತೆ ನಾಲ್ವರ ವರದಿಗಳು ಬರಬೇಕಿದೆ.
ಆರ್ಪಿಎಫ್ ಸಿಬ್ಬಂದಿಯು ಪ್ರಯಾಣ ಕೈಗೊಂಡಿದ್ದಾಗ ಯಾವುದೇ ಸಾರ್ವಜನಿಕರೊಂದಿಗೆ ಸಂಪರ್ಕಕ್ಕೆ ಬಂದಿಲ್ಲ. ಆದರೆ ತುಕಡಿಯ ಆರ್ಪಿಎಫ್ ಸಿಬ್ಬಂದಿಗೆ ಯಾವ ಸಂದರ್ಭಗಳಲ್ಲಿ ಸೋಂಕು ತಗುಲಿದೆ ಎಂಬುದನ್ನು ತಿಳಿಯಲು ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದೆ.