ಈ ಕುರಿತು ಅಕ್ಟೋಬರ್ 29ರಂದು ನಾಲ್ಕು ಅಪರಾಧಿಗಳಿಗೆ ಅಧಿಕಾರಿಗಳು ನೋಟಿಸ್ ರವಾನಿಸಿದ್ದಾರೆ. ‘ಇನ್ನು ಯಾವುದೇ ಕಾನೂನು ಪರಿಹಾರಗಳು ನಿಮಗೆ ಉಳಿದಿಲ್ಲ. ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಇಚ್ಛೆ ಇದ್ದರೆಈ ನೋಟಿಸ್ ತಲುಪಿದ ಏಳು ದಿನದೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ’ ಎಂದು ಉಲ್ಲೇಖಿಸಿದ್ದಾರೆ.