ನವದೆಹಲಿ: ಈಚೆಗಷ್ಟೆ ಜೆಡಿಯು ಸೇರಿದ, ಚುನಾವಣಾ ಕಾರ್ಯತಂತ್ರ ನಿಪುಣಪ್ರಶಾಂತ್ ಕಿಶೋರ್ ಅವರನ್ನು ಪಕ್ಷದಉಪಾಧ್ಯಕ್ಷರನ್ನಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೇಮಿಸಿದ್ದಾರೆ.ಇದರಿಂದಾಗಿ ಅಧಿಕೃತವಾಗಿ ಅವರು ಪಕ್ಷದಲ್ಲಿ ಎರಡನೇ ದೊಡ್ಡ ಹುದ್ದೆಗೆ ಏರಿದ್ದಾರೆ.
ಸಾಂಪ್ರದಾಯಿಕ ಸಮಾಜವಾದಿ ರಾಜಕಾರಣದ ವಿಧಾನಗಳನ್ನು ಹೊರತುಪಡಿಸಿ ಹೊಸ ರೀತಿಗಳನ್ನು ಅನುಸರಿಸಲು,ಸಮಾಜದ ಉಳಿದ ವರ್ಗಗಳನ್ನು ತಲುಪಲು ಕಿಶೋರ್ ಅವರ ನೇಮಕಾತಿಯಿಂದ ಸಹಾಯವಾಗಲಿದೆ ಎಂದು ಪಕ್ಷದ ವಕ್ತಾರ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.
ಆದರೆ ಪಕ್ಷದ ರಾಜಕೀಯ ವ್ಯವಹಾರಗಳನ್ನು ನಿರ್ವಹಿಸಲು ಕಿಶೋರ್ ಅವರನ್ನೇ ನಿತೀಶ್ ಹೆಚ್ಚಾಗಿ ಅವಲಂಬಿಸುವುದು ಹಾಗೂಈಚೆಗಷ್ಟೆಜೆಡಿಯುಸೇರ್ಪಡೆಯಾಗಿರುವ ಅವರಿಗೆ ಈ ಸ್ಥಾನ ನೀಡಿರುವುದು ಪಕ್ಷದ ಹಿರಿಯರಲ್ಲಿ ಅಸಮಾಧಾನ ಮೂಡಿಸುವ ಸಾಧ್ಯತೆ ಹೆಚ್ಚಿದೆ.