ನವದೆಹಲಿ: ಕೋವಿಡ್ ಬಿಕ್ಕಟ್ಟಿನಿಂದಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು 2021ರ ಜೂನ್ವರೆಗೆ ಹೆಚ್ಚಿಸದಿರಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ಇದರಿಂದ ₹37,530 ಕೋಟಿ ಉಳಿತಾಯವಾಗಲಿದೆ.
ಕೇಂದ್ರ ಸರ್ಕಾರದ 50 ಲಕ್ಷ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ.
ಈ ವರ್ಷದ ಜನವರಿ 1ರಿಂದ ಅನ್ವಯವಾಗುವಂತೆಮಾರ್ಚ್ ತಿಂಗಳಲ್ಲಿ ಮಾಡಿದ್ದ ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವೂ ರದ್ದಾಗಿದೆ. 2020ರ ಜನವರಿ 1ರಿಂದ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರದ (ಡಿಆರ್) ಹೆಚ್ಚುವರಿ ಕಂತುಗಳನ್ನು ನೀಡುವುದಿಲ್ಲ.ಸದ್ಯ ಜಾರಿಯಲ್ಲಿರುವ ಭತ್ಯೆಗಳು ಮುಂದುವರಿಯಲಿವೆ.