‘ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲವೇ ಇಲ್ಲ... ಉದ್ಯೋಗಗಳು ಹೇರಳವಾಗಿವೆ. ಆದರೆ, ಉತ್ತರ ಭಾರತದಲ್ಲಿ ಅರ್ಹತೆ ಇರುವ ಯುವ ಜನರೇ ಇಲ್ಲ’ ಎಂದು ತಮ್ಮ ಲೋಕಸಭಾ ಕ್ಷೇತ್ರ ಬರೇಲಿಯಲ್ಲಿ ಮಾತನಾಡುತ್ತಾ ಗಂಗ್ವಾರ್ ಹೇಳಿದ್ದಾರೆ. ಮೊದಲ ನೂರು ದಿನಗಳಲ್ಲಿ ಕೇಂದ್ರದ ಸಾಧನೆಯನ್ನು ಬಣ್ಣಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.