ಸುಬ್ರಮಣಿಯಮ್ ಅವರು ಈಚೆಗೆ ತಿರುಮಲ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ, ಅಲ್ಲಿನ ಕೆಲವು ಭಕ್ತರು ಎಪಿಎಸ್ಆರ್ಟಿಸಿ ಟಿಕೆಟ್ಗಳ ಹಿಂಭಾಗದಲ್ಲಿ ‘ಜೆರುಸಲೆಂ ಯಾತ್ರೆ’ ಕುರಿತು ಜಾಹೀರಾತು ಇರುವ ಬಗ್ಗೆ ಅವರ ಬಳಿ ದೂರಿದ್ದರು. ಇವು ತಿರುಮಲಕ್ಕೆ ಭೇಟಿ ನೀಡುವ ಟಿಕೆಟ್ಗಳಲ್ಲದಿದ್ದರೂ, ದೇಗುಲ ನಗರಿಯಲ್ಲಿ ಕ್ರೈಸ್ತ ಧರ್ಮ ಬೋಧನೆ ಪ್ರಚಾರ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.