ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘2016ರ ನವೆಂಬರ್ನಲ್ಲಿ ನೋಟು ರದ್ದತಿ ನಂತರ ಬಡವರು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಈಗ ಮತ್ತೆ ಅವರನ್ನು ಬಳಲುವಂತೆ ಮಾಡಿದೆ’ ಎಂದು ಆಪಾದಿಸಿದ್ದಾರೆ.‘ನೋಟು ರದ್ದತಿಯಾದ ನಂತರ, ಬ್ಯಾಂಕುಗಳಲ್ಲಿಟ್ಟ ಠೇವಣಿಯನ್ನು ನಿಮ್ಮ ಖಾತೆಯಿಂದಲೇ ಹಿಂಪಡೆಯಲಾಗ ಲಿಲ್ಲ. ನಿಮ್ಮ ಸಂಪೂರ್ಣ ಹಣ 15–20 ಶ್ರೀಮಂತರ ಜೇಬಿಗೆ ಹೋಯಿತು. ಎನ್ಪಿಆರ್ ಅಥವಾ ಎನ್ಆರ್ಸಿ ಸಹ ಇದರಂತೆಯೇ ಆಗಿವೆ’ ಎಂದರು.‘ಬಡವರು ಅಧಿಕಾರಿಗಳ ಬಳಿ ಹೋಗಿ ತಮ್ಮ ದಾಖಲೆ ತೋರಿಸಿ, ತಮ್ಮ ದಾಖಲೆಯಲ್ಲಿ ಸಣ್ಣ ತಪ್ಪಿದ್ದರೂ ಲಂಚ ನೀಡಬೇಕಾಗುತ್ತದೆ. ಈ ಕೋಟ್ಯಂತರ ರೂಪಾಯಿ ಅದೇ 15 ಮಂದಿಗೆ ಹೋಗುತ್ತದೆ’ ಎಂದು ಹೇಳಿದರು.