ಭುವನೇಶ್ವರ (ಒಡಿಶಾ): ಗುಜರಾತ್ನ ಸೂರತ್ನಿಂದ ಒಡಿಶಾಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಫಲ್ಬನಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಅಪಘಾತಕ್ಕೆ ತುತ್ತಾಗಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಒಡಿಶಾದ ಗಂಜಾಮ್–ಕಂದಮಾಲ್ ಗಡಿಯಲ್ಲಿ ಬರುವ ಕಳಿಂಗಾ ಘಾಟ್ನಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಉರುಳಿ ಬಿದ್ದಿದೆ. ಗುಜರಾತ್ನ ಸೂರತ್ನಿಂದ ಒಡಿಶಾದ ಗಂಜಾಮ್ಗೆ ವಲಸೆ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿತ್ತು.
Odisha: A bus carrying stranded migrants from Surat in Gujarat to Berhampur in Odisha, overturned near Kalinga Ghat in between Phulbani & Berhampur, today. Southern Range DIG Satyabrata Bhoi says,"one died and another injured in the incident. Over 40 persons have been rescued." pic.twitter.com/KJwP1AndZl
ಈ ಕುರಿತು ಮಾತನಾಡಿರುವ ಒಡಿಶಾದ ದಕ್ಷಿಣ ವಲಯದ ಡಿಐಜಿ, ಸತ್ಯಬಾರ್ತ ಬೋಯ್, ‘ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರಗೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ,’ ಎಂದು ತಿಳಿಸಿದ್ದಾರೆ.