ಪಿಪ್ಲಿಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯುಧಿಷ್ಠಿರ ಸಮಂತರಾಯ್, ಮಾಜಿ ಸಂಸದ ಬಿಭು ಪ್ರಸಾದ್ ತಾರಾಯ್, ಮಾಜಿ ಮುಖ್ಯಮಂತ್ರಿ ಜೆ.ಬಿ. ಪಟ್ನಾಯಕ್ ಅವರ ಮಗ ಪೃಥ್ವಿ ವಲ್ಲಭ ಪಟ್ನಾಯಕ್ ಅವರೂ ಟಿಕೆಟ್ ವಾಪಸ್ ಕೊಟ್ಟಿದ್ದಾರೆ. ಪೃಥ್ವಿ ಅವರಿಗೆ ಜೆ.ಬಿ.ಪಟ್ನಾಯಕ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ಟಿಕೆಟ್ ನೀಡಲಾಗಿತ್ತು.