‘ನಮ್ಮ ಊರಲ್ಲಿ ಬರ ಇದೆ. ಇಷ್ಟು ಕಡಿಮೆ ಆದಾಯದಲ್ಲಿ ನಾನು ಕುಟುಂಬ ನಿರ್ವಹಣೆ ಹೇಗೆ ಮಾಡಲಿ. ಸಾಲವನ್ನು ಹೇಗೆ ಮರುಪಾವತಿಸಲಿ. ನಾನು ಬೆಳೆದ ಈರುಳ್ಳಿ ಉತ್ತಮ ಗುಣಮಟ್ಟದಿಂದ ಕೂಡಿದ್ದರೂ ಬೆಲೆ ಸಿಗಲಿಲ್ಲ. ಹೀಗಾಗಿ, ಈ ಹಣವನ್ನು ಮುಖ್ಯಮಂತ್ರಿಗೆ ಕಳುಹಿಸಿ ಪ್ರತಿಭಟನೆವ್ಯಕ್ತಪಡಿಸಿರುವೆ’ ಎಂದು ಚಂದ್ರಕಾಂತ್ ಸುದ್ದಿಗಾರರಿಗೆ ತಿಳಿಸಿದರು.