ಒಡಿಶಾದ ಭುವನೇಶ್ವರದಲ್ಲಿ ಮಾತನಾಡಿರುವ ಅವರು, ’ಬಿಎಸ್ಪಿ, ಎಸ್ಪಿ, ಕಮ್ಯುನಿಷ್ಟ್ ಪಕ್ಷ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಸಿಎಎಯನ್ನು ವಿರೋಧಿಸುತ್ತಿವೆ. ಈ ಕಾಯ್ದೆಯಿಂದ ಅಲ್ಪಸಂಖ್ಯಾತರು ತಮ್ಮ ಪೌರತ್ವ ಕಳೆದುಕೊಳ್ಳಲಿದ್ದಾರೆಂದು ಅವರು ಹೇಳುತ್ತಿದ್ದಾರೆ. ಅವರೇಕೆ ಸುಳ್ಳಾಡುತ್ತಿದ್ದಾರೆ? ಸಿಎಎಯಿಂದ ಪೌರತ್ವ ಸಿಗಲಿದೆಯೇ ಹೊರತು ಯಾರ ಪೌರತ್ವವೂ ಹೋಗುವುದಿಲ್ಲ’ಎಂದು ತಿಳಿಸಿದ್ದಾರೆ.