ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ರಾಧಾಮೋಹನ್ ಸಿಂಗ್ ಮತ್ತು ಹರ್ಸಿಮ್ರತ್ ಕೌರ್ ಅವರು ಸಂಪುಟ ಸಭೆಯ ಬಳಿಕ ಬೆಂಬಲ ಬೆಲೆ ಏರಿಕೆಯ ಮಾಹಿತಿ ಪ್ರಕಟಿಸಿದರು. ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ನೀಡಲಾಗುವುದು ಎಂದು ಲೋಕಸಭಾ ಚುನಾವಣೆ ವೇಳೆ ಭರವಸೆ ನೀಡಲಾಗಿತ್ತು. ಅದನ್ನು ಈಗ ಈಡೇರಿಸಲಾಗಿದೆ ಎಂದು ಈ ಸಚಿವರು ತಿಳಿಸಿದರು.