ಭದ್ರತೆಯನ್ನು ಶುಕ್ರವಾರ ಹಿಂಪಡೆಯುತ್ತಲೇ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು. ‘ಭಯೋತ್ಪಾದನಾ ಚಟುವಟಿಕೆ ಇರುವ ಕಾಶ್ಮೀರದಲ್ಲಿ ರಾಜಕೀಯ ಮುಖಂಡರ ಭದ್ರತೆಯನ್ನು ಹಿಂಪಡೆಯುತ್ತಿರುವುದರ ಹಿಂದೆ ಚುನಾವಣೆ ಪ್ರಕ್ರಿಯೆಯನ್ನೇ ಅಸ್ತವ್ಯಸ್ತಗೊಳಿಸುವ, ನಾಯಕರುಗಳನ್ನು ಅಪಾಯಕ್ಕೆ ಸಿಲುಕಿಸುವ ಷಡ್ಯಂತ್ರವಿದೆ,’ ಎಂದು ಆರೋಪಿಸಿದ್ದರು. ಇದಾದ ಮರುದಿನವೇ ರಾಜ್ಯಪಾಲ ಸತ್ಯಪಾಲ್ ಮಲೀಕ್ ಅವರು 400 ಮುಖಂಡರಿಗೆ ಭದ್ರತೆಯನ್ನು ಮರಳಿ ಕಲ್ಪಿಸಿದ್ದಾರೆ.