ಬಿಜೆಪಿ ಭಗವಂತರಾವ್, ಕಾಂಗ್ರೆಸ್ ನ ಫಿರೋಜ್ ಖಾನ್, ಟಿಆರ್ ಎಸ್ ನ ಪಿ.ಶ್ರೀಕಾಂತ್ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು. ಇವರಲ್ಲಿ ಕಾಂಗ್ರೆಸ್ ಹಾಗೂ ಟಿಆರ್ ಎಸ್ ಅಭ್ಯರ್ಥಿಗಳಿಂತ ಬಿಜೆಪಿ ಅಭ್ಯರ್ಥಿ ಆರಂಭದಲ್ಲಿ ಪೈಪೋಟಿ ನೀಡಿದರೂ ಮಧ್ಯಾಹ್ನದ ವೇಳೆಗೆ ಓವೈಸಿಯನ್ನು ಹಿಮ್ಮೆಟ್ಟಲು ಸಾಧ್ಯವಾಗಲಿಲ್ಲ.
ಕೇಂದ್ರದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವಲ್ಲಿ ದಾಪುಗಾಲು ಇಡುತ್ತಿರುವ ಹೊತ್ತಿಗೆ ಹೈದರಾಬಾದ್ ನಲ್ಲಿ ಓವೈಸಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಸಾಗಿದ್ದಾರೆ.