ನಾಲ್ವರು ನಾಗರಿಕರು ಸಾವು: ಬಾಲಾಕೋಟ್ ಉಗ್ರ ಶಿಬಿರಗಳ ಮೇಲಿ ವಾಯು ದಾಳಿ ನಂತರ, ರಾಜ್ಯದ ಎಲ್ಒಸಿಯಲ್ಲಿ ಅದರಲ್ಲೂ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಈವರೆಗೆ ಪಾಕಿಸ್ತಾನ ಸೇನೆ 100ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ಸೈನಿಕರು ಗಡಿಯ 12 ಗ್ರಾಮಗಳನ್ನು ಗುರಿಯಾಗಿಸಿ ನಡೆಸಿರುವ ದಾಳಿಯಿಂದ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ.