ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಾಮಾಣಿಕತೆ ಇದ್ದಲ್ಲಿದಾವೂದ್ ಇಬ್ರಾಹಿಂ, ಸೈಯದ್ ಸಲಾಹುದ್ದೀನ್ ಹಾಗೂ ಇತರ ಭಯೋತ್ಪಾದಕರನ್ನುಪಾಕಿಸ್ತಾನಹಸ್ತಾಂತರ ಮಾಡಬೇಕು ಎಂದು ಭಾರತ ಆಗ್ರಹಿಸಿದೆ.
ಪುಲ್ವಾಮಾ ದಾಳಿಯ ಬಳಿಕವೂ ಜೈಷ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಭಾರತ ಆರೋಪಿಸಿದೆ. ಉಗ್ರರನ್ನು ವಶಕ್ಕೆ ತೆಗೆದುಕೊಂಡಿರುವ ಪಾಕಿಸ್ತಾನದ ನಡೆಯನ್ನು ತೋರಿಕೆಯ ಕ್ರಮ ಎಂದು ದೂರಿದೆ. ಇಂತಹ ಕ್ರಮಗಳಿಂದ ಏನೂ ಆಗುವುದಿಲ್ಲ ಎಂದು ಹೇಳಿದೆ.
ದಾವೂದ್, ಸಲಾಹುದ್ದೀನ್ರನ್ನು ಒಪ್ಪಿಸುವಂತೆ ಮೊದಲಿನಿಂದಲೂ ಭಾರತ ಬೇಡಿಕೆ ಇಟ್ಟಿದೆ. ಪಾಕ್ ನೆಲದಲ್ಲಿ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸುವ ಸಾಕ್ಷ್ಯಗಳನ್ನೂ ಭಾರತ ಒದಗಿಸಿದೆ.