ರಾಜೌರಿ ಜಿಲ್ಲೆಯ ಕೃಷ್ಣ ಘಾಟಿ ಹಾಗೂ ಮೆಂಢರ್ ಪ್ರದೇಶಗಳ ಬಳಿ ಪಾಕಿಸ್ತಾನ ಪಡೆಗಳು ಬುಧವಾರವೂ ಗುಂಡಿನ ದಾಳಿ ನಡೆಸಿದ್ದವು. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿರುವ ಕಮಲಾಕೋಟ್ ಎಂಬಲ್ಲಿಯೂ ಮತ್ತೊಂದು ದಾಳಿ ಪ್ರಕರಣ ವರದಿಯಾಗಿತ್ತು. ಈ ಎಲ್ಲ ದಾಳಿಗಳನ್ನು ಭಾರತ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದವು.