ಅನುಷ್ಠಾನ ಸಮಿತಿ: ಕಾವೇರಿ ವಿವಾದ ಕುರಿತು 2007ರ ಫೆಬ್ರುವರಿ 5ರಂದು ನ್ಯಾಯಮಂಡಳಿ ನೀಡಿದ್ದ ಐತೀರ್ಪು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ವಿಲೀನಗೊಂಡಂತಾಗಿದೆ. ಕೇಂದ್ರದ ಜಲಸಂಪನ್ಮೂಲ ಸಚಿವರು ಅಧ್ಯಕ್ಷರಾಗಿರುವ ಹಾಗೂ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಜಲಸಂಪನ್ಮೂಲ ಸಚಿವರು ಸದಸ್ಯರಾಗಿರುವ, ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯು ಸದಸ್ಯ ಕಾರ್ಯದರ್ಶಿ ಆಗಿರುವ ‘ಕಾವೇರಿ ನಿರ್ಣಯ ಅನುಷ್ಠಾನ ಸಮಿತಿ’ ರಚಿಸುವ ಮೂಲಕ ಸ್ಕೀಂ ರೂಪಿಸಬೇಕು.