ಶನಿವಾರ ಸಂಜೆ ಪ್ರಜಾಪ್ರಭುತ್ವ ಸಂಘಟನೆಗಳು ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಬಿಜೆಪಿ ನಮ್ಮ ಎದುರಾಳಿ ಎಂದು ನಾನು ಪರಿಗಣಿಸುವುದಿಲ್ಲ. ಆದರೆ ಶೇ. 30ರಷ್ಟು ಹೆಚ್ಚು ಮತ ಪಡೆದು ದೇಶದ ಹಣೆಬರಹವನ್ನು ಬದಲಿಸಲು ಸಾಧ್ಯ ಎಂದು ಬಿಜೆಪಿ ತೋರಿಸಿಕೊಟ್ಟಿದೆ. ಬಿಜೆಪಿ ದೇಶದಲ್ಲಿ ಮಾಡಿದ ಅನಾಹುತಗಳನ್ನು ಸರಿ ಮಾಡಬೇಕಾಗದೆ ಇನ್ನು ಕನಿಷ್ಟ 10 ವರ್ಷಗಳು ಬೇಕಾಗುತ್ತವೆ. ಅವರಿಗೆ ಅಧಿಕಾರ ಮುಂದುವರಿಸಲು ಬಿಟ್ಟರೆ, ಗಾಯ ವಾಸಿಯಾಗಲು ಇನ್ನಷ್ಟು ಸಮಯಬೇಕು. ದೇಶದ ಐಕ್ಯತೆಯನ್ನೇ ಅವರು ಕದಡಿದ್ದಾರೆ ಎಂದಿದ್ದಾರೆ ರೈ.