’ಗಾಂಧೀಜಿ ಮೇಲೆ ಮೂರು ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ವಿವಿಧ ನ್ಯಾಯಾಲಯಗಳು, ನಾಥುರಾಮ್ ಗೋಡ್ಸೆ ಮತ್ತು ನಾರಾಯಣ್ ಅಪ್ಟೆ ಅವರನ್ನು ಅಪರಾಧಿಗಳನ್ನಾಗಿ ಪರಿಗಣಿಸಿ ಗಲ್ಲಿಗೇರಿಸಲಾಯಿತು. ಆದರೆ, ನಾಲ್ಕನೇ ಗುಂಡು ಹಾರಿಸಲಾಯಿತೇ ಎನ್ನುವ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ. ಈ ಗುಂಡನ್ನು ಬೇರೊಬ್ಬರು ಹಾರಿಸಿರುವ ಸಾಧ್ಯತೆ ಇದೆ’ ಎಂದು ಫಡ್ನಿಸ್ ಅರ್ಜಿಯಲ್ಲಿ ವಿವರಿಸಿದ್ದರು.