‘ಸರ್ಕಾರವು ಹಲವು ಮಹತ್ವದ ಸುಧಾರಣೆಗಳನ್ನು ತಂದಿದೆ. ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಮೀಸಲಾತಿಗಳಲ್ಲಿ ಸರ್ಕಾರವು ಬದಲಾವಣೆ ತಂದಿದೆ. ತ್ರಿವಳಿ ತಲಾಕ್ ನಿಷೇಧದಂತಹ ಪ್ರಗತಿದಾಯಕ ಹೆಜ್ಜೆ ಇರಿಸಿದೆ. ಈ ಹಿಂದಿನ ಸಂಸತ್ತಿನ ಅಧಿವೇಶನವು ಅತ್ಯಂತ ಫಲಪ್ರದವಾಗಿತ್ತು. ಇದು ಮುಂದಿನ ಐದು ವರ್ಷಗಳಲ್ಲಿ ಏನೇನು ನಡೆಯಲಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.