ಅಕ್ಟೋಬರ್ 2ರಂದು ಶಾಮ್ಲಿ ಜಿಲ್ಲೆಯ ಕಮಲಾಪುರ್ ಚೆಕ್ಪೋಸ್ಟ್ನಲ್ಲಿ ಪೊಲೀಸರಿಂದ ಎರಡು ಬಂದೂಕುಗಳನ್ನು ಬಂಧಿತರು ದೋಚಿದ್ದರು. ಭಾನುವಾರ (ಅಕ್ಟೋಬರ್ 14) ಇವರನ್ನು ಬಂಧಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬಾದಲ್ ಅವರ ಹತ್ಯೆಯ ಸಂಚಿನ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.