ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಸಂಶೋಧನೆ ನಡೆಸಿ, ಸಂಸ್ಕರಿತ ಬನ್, ಪಿಜ್ಜಾ, ಕೇಕ್, ಕುರುಕಲು ತಿಂಡಿ ಇತ್ಯಾದಿ ಖಾದ್ಯಗಳು ರೋಗಕ್ಕೆ ಕಾರಣವಾಗುತ್ತವೆ
ಎಂದು ಹೇಳುತ್ತಲೇ ಇದ್ದಾರೆ. ಮಕ್ಕಳು ಇಷ್ಟಪಟ್ಟು ಇಂಥ ಖಾದ್ಯಗಳನ್ನೇ ಕೇಳುತ್ತಾರೆ. ಪೋಷಕರು ಅವುಗಳನ್ನು ಕೊಡಿಸುವ ಪ್ರವೃತ್ತಿಯನ್ನೂ ರೂಢಿಸಿಕೊಂಡಿದ್ದಾರೆ. ಆರೋಗ್ಯಕ್ಕೆ ಪೂರಕವಾದ ರೊಟ್ಟಿ, ತುಪ್ಪ, ದೋಸೆ, ಚಟ್ನಿ ಹೆಸರುಗಳು ಇಂದಿನ ಮಕ್ಕಳ ಬಾಯಲ್ಲಿ ಬರುವುದೇ ಇಲ್ಲ.