ಬೆಂಗಳೂರು:2020ನೇ ವರ್ಷ ಸಮೃದ್ಧಿ, ಆರೋಗ್ಯ ತುಂಬಿದ ನೆಮ್ಮದಿಯ ವರ್ಷವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಮೂಲಕ ನಾಡಿನ ಹಾಗೂ ದೇಶದ ಜನರಿಗೆ ಶುಭಾಶಯ ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. #happynewyear2020
— B.S.Yediyurappa (@BSYBJP) December 31, 2019
2020ನೇ ವರ್ಷ ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದುಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.
ಈ ವರ್ಷ ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲಿ, ಎಲ್ಲರೂ ಆರೋಗ್ಯವಾಗಿರಲಿ ಮತ್ತು ಎಲ್ಲರ ಆಕಾಂಕ್ಷೆಗಳು ಈಡೇರಲಿ ಎಂದುಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ಹೇಳಿದ್ದಾರೆ.
Have a wonderful 2020!
— Narendra Modi (@narendramodi) January 1, 2020
May this year be filled with joy and prosperity. May everyone be healthy and may everyone’s aspirations be fulfilled.
आप सभी को साल 2020 की हार्दिक शुभकामनाएं।
ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. ತಮ್ಮೆಲ್ಲರ ಕಷ್ಟದ ದಿನಗಳು ಕಳೆದು ಸುಖ, ಶಾಂತಿ, ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. ತಮ್ಮೆಲ್ಲರ ಕಷ್ಟದ ದಿನಗಳು ಕಳೆದು ಸುಖ, ಶಾಂತಿ, ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುತ್ತೇನೆ. #happynewyear2020 pic.twitter.com/1m2KlZPGPF
— Siddaramaiah (@siddaramaiah) January 1, 2020
ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು ಎಂದು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು.#HappyNewYear
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 31, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.