ವಾರಾಣಸಿಯಲ್ಲಿ ಸ್ಪರ್ಧೆ ಮಾಡದೆ ಇರುವುದು ಅವರ ಸ್ವಂತ ನಿರ್ಧಾರ, ಒಂದು ಕಡೆ ರಾಷ್ಟ್ರದ ಎಲ್ಲಾ ಲೋಕಸಭಾ ಕ್ಷೇತ್ರಗಳ ಕಡೆ ಗಮನ ಕೊಡಬೇಕು. ಅವುಗಳ ಜವಾಬ್ದಾರಿ ತುಂಬಾ ಮುಖ್ಯವಾಗಿರುವಾಗ ಕೇವಲ ಒಂದು ಸೀಟಿಗಾಗಿ ಹೆಚ್ಚು ಗಮನ ಕೊಡುವುದು ಸರಿಯಲ್ಲ ಎಂದು ಆಕೆ ಯೋಚಿಸಿರಬಹುದು. ಹಾಗಾಗಿ ನಿರ್ಧಾರ ಅವರಿಗೆ ಬಿಟ್ಟಿದ್ದು, ಅವರು ನಿರ್ಧರಿಸಿದ್ದಾರೆ ಎಂದು ಪಿತ್ರೊಡಾ ತಿಳಿಸಿದ್ದಾರೆ.