ಲಖನೌ: ‘ಪಿಎಂ–ಕೇರ್ಸ್’ ನಿಧಿಗೆ ಸರ್ಕಾರ ಪ್ರತಿಯೊಬ್ಬರಿಂದ ₹ 100 ಸಂಗ್ರಹಿಸುತ್ತಿದ್ದು, ಈ ನಿಧಿಯನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಲಹೆ ಮಾಡಿದ್ದಾರೆ.
ಜನತೆ ಸಂಕಷ್ಟದಲ್ಲಿದ್ದಾರೆ. ಪಡಿತರ ಕೊರತೆಯಿದೆ. ನೀರಿನ ಅಭಾವವಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರ ತಲಾ ₹ 100 ಸಂಗ್ರಹ ಮಾಡುತ್ತಿದೆ. ಹೀಗಾಗಿ,ಲೆಕ್ಕಪರಿಶೋಧನೆ ಅಗತ್ಯವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ದೇಶದಿಂದ ಓಡಿಹೋಗಿದ್ದ ಬ್ಯಾಂಕ್ನ ಕಳ್ಳರಿಗೆ’ ನೀಡಿದ್ದ₹ 68 ಸಾವಿರ ಕೋಟಿ ಸಾಲವನ್ನು ತಾಂತ್ರಿಕವಾಗಿ ವಜಾ ಮಾಡಿದ ತೀರ್ಮಾನ ಯಾರದು?’ ಎಂದೂ ಅವರು ಪ್ರಶ್ನಿಸಿದ್ದಾರೆ.